ಗದಗ : ಗದಗ ತಾಲೂಕಿನ ನಾಗಾವಿ ತಾಂಡ ಸಿದ್ದರಾಮೇಶ್ವರ ನಗರದಲ್ಲಿ ಕೆಲ ದಿನಗಳಿಂದ ಕಾಣಿಸಿಕೊಳ್ಳುತ್ತಿದ್ದ ನಾಗರಹಾವನ್ನು ರಕ್ಷಣೆ ಮಾಡಲಾಗಿದೆ. ಗ್ರಾಮದ ಏಳುಮಕ್ಕಳ ತಾಯಿ ದೇವಸ್ಥಾನದ ಬಳಿಯ ರಸ್ತೆಯಲ್ಲಿ ಮೊಟ್ಟೆ ಇಟ್ಟು ಸುತ್ತಲ ಪ್ರದೇಶದಲ್ಲೇ ಈ ನಾಗರ ಹಾವು ಸುಳಿದಾಡುತ್ತಿತ್ತು. ಪದೇ ಪದೇ ಹಾವು ಕಾಣಿಸಿಕೊಂಡಿದ್ದರಿಂದ ಸ್ಥಳೀಯರು ಭಯಭೀತರಾಗಿದ್ದರು.
ಈ ವಿಚಾರವನ್ನು ಉರಗ ಪ್ರಿಯ ಸ್ನೇಕ್ ಸುರೇಶ್ಗೆ ತಿಳಿಸಿದರು. ಮಾಹಿತಿ ಪಡೆದು ಸ್ಥಳಕ್ಕೆ ಬಂದ ಸ್ನೇಕ್ ಸುರೇಶ್ 12 ಮೊಟ್ಟೆಗಳ ಸಮೇತ ನಾಗರ ಹಾವನ್ನು ರಕ್ಷಣೆ ಮಾಡಿ, ಗ್ರಾಮದ ಆಚೆಯ ಅರಣ್ಯ ಪ್ರದೇಶದಲ್ಲಿ ಬಿಡುಗಡೆಗೊಳಿಸಿದ್ದಾರೆ.
50ಕ್ಕೂ ಅಧಿಕ ಮೊಸಳೆ ಮರಿಗಳ ರಕ್ಷಣೆ : ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ರೈತರೋರ್ವರ ಕೃಷಿ ಹೊಂಡದ ದಂಡೆಯಲ್ಲಿ ಮೊಸಳೆ ಮೊಟ್ಟೆ ಹಾಗೂ ಮರಿಗಳು ಇತ್ತೀಚಿಗೆ ಪ್ರತ್ಯಕ್ಷವಾಗಿದ್ದವು. ಸ್ಥಳೀಯರು ಕೃಷಿ ಜಮೀನಿನ ಬದುವನ್ನು ಅಗೆದು, ಅಲ್ಲಿದ್ದ 50ಕ್ಕೂ ಹೆಚ್ಚು ಮೊಸಳೆ ಮರಿಗಳನ್ನು ಸುರಕ್ಷಿತವಾಗಿ ರಕ್ಷಿಸಿ ಅರಣ್ಯ ಇಲಾಖೆಗೆ ಒಪ್ಪಿಸಲಾಗಿತ್ತು.
ಇದನ್ನೂ ಓದಿ: ಚಿಕ್ಕೋಡಿ: 50ಕ್ಕೂ ಹೆಚ್ಚು ಮೊಸಳೆ ಮರಿಗಳನ್ನು ರಕ್ಷಿಸಿದ ಗ್ರಾಮಸ್ಥರು - ವಿಡಿಯೋ